Advertisement

Speaker Ramesh Kumar Is Disappointed With CM Kumaraswamy's Administration..!

Speaker Ramesh Kumar Is Disappointed With CM Kumaraswamy's Administration..! Speaker Ramesh Kumar Is Disappointed With CM Kumaraswamy's Administration..!

ಕಳೆದ ಒಂದು ವರ್ಷದ ಅವಧಿಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳ ಕಾಲ ಯಶಸ್ವಿ ಆಡಳಿತ ನೀಡಿದ್ದೀರಿ. ಆದರೆ ಈ ಬಾರಿ ಆದರೆ ಈ ಒತ್ತಡವನ್ನ ಸಮರ್ಪಕವಾಗಿ ನಿರ್ವಹಿಸುವಲ್ಲಿ ನೀವು ಎಡವುತ್ತಿದ್ದೀರಾ ಅನ್ನೋದು ನನ್ನ ಭಾವನೆ ಎಂದು ಪತ್ರ ಬರೆದಿದ್ದಾರೆ.

ಸ್ಪೀಕರ್ ಪತ್ರದಲ್ಲೇನಿದೆ?
ಕಳೆದ ಒಂದು ವರ್ಷದಿಂದ ರಾಜ್ಯ ಸಮ್ಮಿಶ್ರ ಸರ್ಕಾರದ ಜವಾಬ್ದಾರಿಯನ್ನ ಹೊತ್ತು ತಾವು ಸರ್ಕಾರವನ್ನ ನಡೆಸುತ್ತಿದ್ದೀರಿ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನ ಮತ್ತು ಎಲ್ಲವನ್ನ ಸರಿದೂಗಿಸಿಕೊಂಡು ಹೋಗಬೇಕಾದ ಒತ್ತಡದ ಸನ್ನಿವೇಶದಲ್ಲಿ ನೀವು ಸರ್ಕಾರವನ್ನ ಮುನ್ನಡೆಸುತ್ತಿದ್ದೀರಿ ಅನ್ನುವುದು ನನಗೆ ಗೊತ್ತು. ಆದರೆ ಈ ಒತ್ತಡವನ್ನ ಸಮರ್ಪಕವಾಗಿ ನಿರ್ವಹಿಸುವಲ್ಲಿ ನೀವು ಎಡವುತ್ತಿದ್ದೀರಾ ಅನ್ನೋದು ನನ್ನ ಭಾವನೆ. ಈ ಹಿಂದೆಯೂ ತಾವು ಸಮ್ಮಿಶ್ರ ಸರ್ಕಾರವನ್ನ ಯಶಸ್ವಿಯಾಗಿ 20 ತಿಂಗಳುಗಳ ಕಾಲ ನಡೆಸಿದವರು. ಆ ಮೂಲಕ ರಾಜ್ಯದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದವರು ನೀವು. ಆದರೆ ಈ ಬಾರಿಯ ಸರ್ಕಾರದಲ್ಲಿ ನಿಮ್ಮ ಆಡಳಿತ ನೈಪುಣ್ಯತೆಯಾಗಲಿ, ಜನಪ್ರಿಯತೆಯಾಗಲಿ ಯಾವುದು ನನಗೆ ಕಾಣಿಸಲಿಲ್ಲ. ನೀವು ಮುಖ್ಯಮಂತ್ರಿಯಾಗಿ ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು. ಅದರಲ್ಲೂ ಸಮ್ಮಿಶ್ರ ಸರ್ಕಾರದ ನಾಯಕನಾಗಿ ನೀವು ಇನ್ನು ಹೆಚ್ಚು ಡೆಮಾಕ್ರಟಿಕ್ ಆಗಿ ವರ್ತಿಸಬೇಕು ಅನ್ನೋದು ನನ್ನ ಅಭಿಪ್ರಾಯ. ನಿಮ್ಮ ಆಡಳಿತ ವೈಖರಿ ಹಾಗೂ ಸಾರ್ವಜನಿಕವಾದ ಕೆಲವೊಂದು ನಡೆಗಳು ನಿಮ್ಮ ಬಗ್ಗೆ ಅಪಾರ ಗೌರವ ಇಟ್ಟಿರುವ ನನಗೆ ಅಷ್ಟೊಂದು ಸಮಂಜಸ ಅನ್ನಿಸಲಿಲ್ಲ. ಇದು ನನ್ನ ವೈಯುಕ್ತಿಕ ಅಭಿಪ್ರಾಯವೇ ಹೊರತು ಅನ್ಯತ ಭಾವಿಸಬಾರದು ಅನ್ನೋದು ನನ್ನ ಕಳಕಳಿಯ ಮನವಿ ಎಂದು ತಿಳಿಸಿದ್ದಾರೆ.

ಇರುವ ವಿಚಾರವನ್ನು ನೇರವಾಗಿ ಹೇಳುವ ರಮೇಶ್ ಕುಮಾರ್ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸದನಲ್ಲಿ ಸರ್ಕಾರದ ಮಂತ್ರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರ ಹಾಕಿ ಬಹಿರಂಗವಾಗಿಯೇ ಟೀಕಿಸುತ್ತಿದ್ದರು. ಈಗ ರಾಜ್ಯ ದೋಸ್ತಿಗಳ ನಡುವಿನ ಹಗ್ಗ ಜಗ್ಗಾಟದಿಂದ ರಾಜ್ಯದ ಜನರಿಗೆ ಸಮರ್ಪಕ ಆಡಳಿತ ನೀಡದ್ದಕ್ಕೆ ಬೇಸರಗೊಂಡು ರಮೇಶ್ ಕುಮಾರ್ ಈ ಪತ್ರವನ್ನು ಬರೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.

Keep Watching Us On Youtube At:
Watch More From This Playlist Here:



Read detailed news at www.publictv.in

Subscribe on YouTube:
Follow us on Google+ @
Like us @
Follow us on twitter @

--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Public TV,Public TV Live,Kannada Live News,Kannada latest news,Karnataka Latest News,Karnataka Politics,Karnataka Political Developments,HR Ranganath,Sandalwood News,public tv kannada live,Speaker Ramesh Kumar,Ramesh Kumar Is Disappointed With CM Kumaraswamy's Administration,cm kumaraswamy,coalition government,ramesh kumar letter to cm kumaraswamy,speaker ramesh kumar speech,speaker ramesh kumar comedy,siddaramaiah,congress jds alliance,

Post a Comment

0 Comments